ವಿಜಯಪುರ: ರಾಜ್ಯಾದ್ಯಂತ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮನೆಯಲ್ಲಿ ಕುಳಿತುಕೊಂಡು ವಾರಕ್ಕೆ 15 ಸಾವಿರ ಗಳಿಸಬಹುದೆಂದು ಆನ್ಲೈನ್ ಮಾಹಿತಿ ನಂಬಿದ ಮಹಿಳೆಯೊಬ್ಬರು ಬರೋಬ್ಬರಿ 10.58 ಲಕ್ಷ ವಂಚನೆಗೀಡಾದ ಘಟನೆ ವಿಜಯಪುರದ ಸೇನಾ ನಗರದಲ್ಲಿ ನಡೆದಿದೆ. ಮೈತ್ರಾದೇವಿ ಹುಡಿಮನಿ ವಂಚನೆಗೀಡಾದ ಮಹಿಳೆ.
ಇನ್ಸ್ಟ್ರಾಗ್ರಾಂನಲ್ಲಿ ನಟರಾಜ್ ಪೆನ್ಸಿಲ್ಗಳನ್ನು ಪ್ಯಾಕಿಂಗ್ ಮಾಡುವ ಪಾರ್ಟ್ ಟೈಂ ಜಾಬ್ ಮಾಡಿದರೆ ವಾರಕ್ಕೆ 15 ಸಾವಿರ ಗಳಿಸಬಹುದೆಂದು ಅದರಲ್ಲಿ ಮೂರು ಮೊಬೈಲ್ಗಳನ್ನು ನಮೂದಿಸಿದ್ದರು. ಅದಕ್ಕೆ ಮಾರು ಹೋದ ಮೈತ್ರಾದೇವಿ, ಆ ನಂಬರ್ಗಳಿಗೆ ಮಾತನಾಡಿ, ಆಧಾರ್ ಕಾರ್ಡ್ ಹಾಗೂ ಫೋಟೋ ಕಳುಹಿಸಲು ತಿಳಿಸಿದ್ದರು. ಬಳಿಕ ಐಡಿ ಕಾರ್ಡ್ ಬಂತು. ಬಳಿಕ ಇನ್ಸ್ಟ್ರಾಗ್ರಾಂನಲ್ಲಿ ತಿಳಿಸಿದ ಬೇರೆ ಬೇರೆ ಯುಪಿಐ ಐಡಿಗಳಿಗೆ ಹಂತ-ಹಂತವಾಗಿ ಮೈತ್ರಾದೇವಿ 10.58 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ನಟರಾಜ್ ಪೆನ್ಸಿಲ್ ಪ್ಯಾಕಿಂಗ್ ಮಾಡುವ ಯಾವುದೇ ಸಲಕರಣೆಗಳನ್ನು ಕಳಿಸದೇ ವಂಚಿಸಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)