![](https://karnataka1news.com/wp-content/uploads/2023/11/IMG_20231121_211435-723x1024.jpg)
ವಿಜಯಪುರ: ರೌಡಿಶೀಟರ್ ಹೈದರ್ ಅಲಿ ನದಾಫ್ ಹಾಗೂ ಹಣಕಾಸಿನ ವ್ಯವಹಾರ ಹಿನ್ನೆಲೆ ಓರ್ವನ ಮೇಲೆ ಫೈರಿಂಗ್ ನಡೆಸಿದ 12 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 10ರಂದು ನಗರದ ಒಡ್ಡರ ಓಣಿಯಲ್ಲಿ ಸೋಹೇಲ್ ಕಕ್ಕಳಮೇಲಿ ಮೇಲೆ ಫೈರಿಂಗ್ ನಡೆಸಿ, ಪರಾರಿಯಾಗಿದ್ದರು. ಅದಕ್ಕಾಗಿ ಎಸ್ಪಿ ಋಷಿಕೇಶ್ ನೇತೃತ್ವದಲ್ಲಿ ತಂಡ ರಚಿಸಿ, 12 ಜನ ಆರೋಪಿಗಳನ್ನು ಲಾಕ್ ಮಾಡಲಾಗಿದೆ. ಅಲ್ಲದೇ, ಬಂಧಿತ ಆರೋಪಿಗಳಿಂದ ಎರಡು ಕಂಟ್ರಿ ಪಿಸ್ತೂಲ್, ಎರಡು ಬೈಕ್, ಒಂದು ಲಾಂಗ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ, ಕಂಟ್ರಿ ಪಿಸ್ತೂಲ್ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳ ಪೈಕಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರು ಎಂದರು.
![](https://karnataka1news.com/wp-content/uploads/2023/11/IMG_20231121_211446-1024x915.jpg)