ವಿಜಯಪುರ: ಗೆದ್ದಿತ್ತಿನ ಬಾಲ ನಾವು ಹಿಡಿದುಕೊಂಡು ಹೋಗಿರಲಿಲ್ಲ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಬಿ ಟೀಂ ಅಂತಹೇಳಿದ ಕಾಂಗ್ರೆಸ್ ನವರೇ ಬಿಜೆಪಿ ಬಿ ಟೀಂ ಬಳಿ ಬಂದ್ರು. ನಾವು ಅರ್ಜಿ ಹಿಡಿದುಕೊಂಡು ಹೋಗಿದ್ವಾ ಅವರ ಮನೆಗೆ ಎಂದು ವಾಗ್ದಾಳಿ ಮಾಡಿದರು. ಇನ್ನೂ ನಾನೇ ಸಿಎಂ ಮಾಡಿ ಅಂತ ಅರ್ಜಿ ಹಾಕಿರಲಿಲ್ಲ.
ಗುಲಾಂ ನಬಿ ಆಜಾದ್, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಬದುಕಿದ್ದಾರೆ. ಅಶೋಕ್ ಹೊಟೇಲ್ನಲ್ಲಿ ನನ್ನ ಮಗನ ಆರೋಗ್ಯ ಅಷ್ಟು ಸರಿ ಇರಲಿಲ್ಲ. ನೀವೆ ಯಾರಾದರೂ ಸಿಎಂ ಆಗಿ ಅಂತ ದೇವೇಗೌಡರು ಹೇಳಿರಲಿಲ್ವಾ..? ಬಲವಂತವಾಗಿ ಸಿಎಂ ಕಟ್ಟಿದ್ದು ನೀವೂ. ಮೈತ್ರಿ ಸರ್ಕಾರ ತೆಗೆದವರು ನೀವೇ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ನೀವು ಅದನ್ನು ಹೇಳಿಕೊಳ್ಳದೇ ಬೇರೇ ಏನೇನೋ ಹೇಳಿಕೊಳ್ಳುತ್ತಾರೆ. ಈಗ ಅದು ಮುಗಿದು ಹೋಗಿರುವ ಅಧ್ಯಾಯ ಎಂದರು. ಈಗ ಜೆಡಿಎಸ್ ಗೆ 20ಸೀಟು ಬರಲ್ಲ ಅಂತ ಹೇಳ್ತಿರಲ್ಲಾ!? 20ರ ಸೀಟು ಮುಂದೆ 1ನಂಬರ್ ಸೇರಿಸಿ 120 ಸ್ಥಾನ ರಾಜ್ಯದ ಜನ ತರುತ್ತಾರೆ. 20ಸೀಟು ಬರುತ್ತೆ ಅಂತ ಹೇಳೋರು ನೀವ್ಯಾರು. ರಾಜ್ಯದ ಜನ ಅದನ್ನು ತೀರ್ಮಾನ ಮಾಡ್ತಾರೆ.
ಅಲ್ಲದೇ, ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಹಸ್ತ- ಎಲ್ ಆರ್ ಶಿವರಾಮೇಗೌಡ ಕೈ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೇನು ಹೊಸದಲ್ಲ. ಪಾರ್ಲಿಮೆಂಟ್ ಚುನಾವಣೆಯ ಹೇಗೆಲ್ಲಾ ಆಯ್ತು. ಈ ಬಾರಿ ಕಾಂಗ್ರೆಸ್ ಕುತಂತ್ರ ರಾಜಕೀಯಕ್ಕೆ ಹಳೆ ಮೈಸೂರು ಭಾಗದ ಜನ ದಾರಿ ತಪ್ಪಿವುದಿಲ್ಲ. ಆಪರೇಷನ್ ಹಸ್ತ ವರ್ಕೌಟ್ ಆಗಲ್ಲ ಎಂದರು.