ವಿಜಯಪುರ: ಆನ್ಲೈನ್ನಲ್ಲಿ ಹಣ ಡಬಲ್ ಮಾಡುತ್ತೇವೆ ಎಂದು ನಂಬಿಸಿ ಬರೋಬ್ಬರಿ 13 ಲಕ್ಷ ಹಣವನ್ನು ಸಾಫ್ಟವೇರ್ ಇಂಜಿನಿಯರ್ಗೆ ವಂಚನೆ ಮಾಡಿರುವ ಘಟನೆ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ನಡೆದಿದೆ. ದೀಪಕ್ ಅರಕೇರಿ ಮೋಸ ಹೋದವರು. ಇನ್ನು ರುಬಿ ಎಂಬು ಷೇರಿನಲ್ಲಿ ಹಣ ಹೂಡಿಕೆಗೆ 13 ಲಕ್ಷ ನೀಡಿದ್ರೇ 45 ಲಕ್ಷ ಹಣ ನೀಡುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ ಬರೋಬ್ಬರಿ 13 ಲಕ್ಷ ಹಣ ನೀಡಿ ವಂಚನೆಗೆ ಒಳಗಾಗಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.