ವಿಜಯಪುರ: 15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯತಿನಲ್ಲಿ ನಡೆದಿದೆ. ಪಿಡಿಓ ಸಂಗಮೇಶ ಕುಂಬಾರ ಲೋಕಾಯುಕ್ತರ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, 2 ಗುಂಟೆ ಖುಲ್ಲಾ ಜಾಗೆಯ ಉತಾರ ಮಾಡಲು ಪಿಡಿಓ ಕುಂಬಾರ ಹಣಕ್ಕ ಬೇಡಿಕೆ ಇಟ್ಟಿದ್ದಾರೆ. 20 ಸಾವಿರ ಲಂಚ ನೀಡುವಂತೆ ಮಹಾದೇವಿ, ವಿಜಯಲಕ್ಷ್ಮಿ ಹೇಳಿದ್ದಾರೆ. ಅದಕ್ಕಾಗಿ 20 ಸಾವಿರ ಹಣದಲ್ಲಿ 15 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)