ವಿಜಯಪುರ: ಈಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರ ತೊಡಗಿಸಿದ ಕೋಟ್ಯಾಂತರ ಹಣವನ್ನು ಆಡಳಿತದವರೇ ತಿಂದು ನೀರು ಕುಡಿದಿದ್ದಾರೆ. ಹೌದು.. ವಿಜಯಪುರ ನಗರದ ಈಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 2.48 ಕೋಟಿ ಹಣ ಮಂಗ ಮಾಯವಾಗಿದೆ.
ಸೊಸೈಟಿಯ ಅಧ್ಯಕ್ಷ ಮಲ್ಲಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಬಸವರಾಜ್ ಲಾಳಸಂಗಿ, ಮೋಹನ ಜೋಗುರ, ಸೋಮಶೇಖರ್ ಬಂದರವಾಡ, ನಾಗರಾಜ್ ಅಣೆಪ್ಪನವರ, ಅಯ್ಯಪ್ಪ ಕಂಬಿ, ಮಹಾದೇವಪ್ಪ ಕಾಪಸೆ, ಗಿರೀಶ ನಾಗುರ, ಶಿವಣ್ಣ ಮಾರಲಬಾವಿ, ಶಿವಾನಂದ ಬಾಗಲಕೋಟ, ಸಂತೋಷ ಕಕ್ಕಳಮೇಲಿ, ಭಾರತಿ ಜೋಗುರ, ನಾಗರಾಜ್ ಹಂಚನಾಳ, ಎಸ್ಎಂ ಕೋಟಿ ವಿರುದ್ಧ ಕೇಸ್ ದಾಖಲಾಗಿದೆ.
ಈಶ್ವರ ಹಣಕ್ಕೆ ಮಾಸ್ಟರ್ ಪ್ಲ್ಯಾನ್..
ಹಣ ಸೊಸೈಟಿಯಲ್ಲಿ ಸೇಫ್ ಆಗಿರುತ್ತದೆ ಎಂದು ಜನತೆ ನಂಬಿ ಕೋಟಿ ಕೋಟಿ ಹಣವನ್ನು ಈಶ್ವರ ಕೋ ಆಪರೇಟಿವ್ ಸೊಸಾಯಿಟಿಯಲ್ಲಿ ಹಣ ತೊಡಗಿಸಿಕೊಂಡಿದ್ದಾರೆ. ಆದ್ರೇ, ಆಡಳಿತ ಮಂಡಳಿ ವರ್ಷಾನುಗಟ್ಟಲೆ ಸಭೆ ಕರೆಯದೇ ಹಣ ನುಂಗಿ ಸೈಲೆಂಟ್ ಆಗಿದ್ದಾರೆ. ಅಲ್ಲದೇ, ಕೋಟಿ ಕೋಟಿ ಹಣವನ್ನು ಆರೋಪಿಗಳು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಗೀತಾ ಬಗಲಿ, ಮನೋಜ ಬಗಲಿ ದೂರು ದಾಖಲು ಮಾಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.