ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಜಿಲ್ಲೆಯ 8 ಮತಕ್ಷೇತ್ರದಿಂದ ಒಟ್ಟು 20 ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಎಂಟು ಮತಕ್ಷೇತ್ರದಿಂದ 20 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರ: ಐಜಾಜ್ ಅಹ್ಮದ ಜಾಗೀರದಾರ, ಸಿಂದಗಿ ಮತಕ್ಷೇತ್ರ: ಅಮೀರಮಜಾ ಚೌಧರಿ, ಅಕ್ಬರ್ ಖಾಜಾಸಾಬ್ ಮುಲ್ಲಾ, ಇಂಡಿ ಮತಕ್ಷೇತ್ರ: ಶಿವಶರಣ ಜೆಟ್ಟೆಪ್ಪ ವಾಲೀಕಾರ್, ಮಹೆಬೂಬ್ ಅಬ್ದುಲ್ಗನಿಸಾಬ್ ಅರಬ, ನಾಗಠಾಣ ಮೀಸಲು ಮತಕ್ಷೇತ್ರ: ಅರ್ಜುನ ಬಂಡಿ, ಮಹೇಂದ್ರ ನಾಯಿಕ್, ಶಂಕರ ಪೂಜಾರಿ, ರವೀಂದ್ರ ಕಟ್ಟಿಮನಿ, ಬಬಲೇಶ್ವರ ಮತಕ್ಷೇತ್ರ: ಇಮಾಮ್ಜಾಫರ್ ತಿಡಗುಂದಿ, ಮೈಬೂಬ ಮುಲ್ಲಾ, ಯಾಸೀನ್ ಜವಳಿ, ಜಗದೀಶ ಮಲ್ಲಪ್ಪ ಬಿಸಿರೊಟ್ಟಿ, ಕೃಷ್ಣಾ ಚವ್ಹಾಣ, ಸಂಗಪ್ಪ ಇಂಡಿ, ಸಂಗಯ್ಯ ಮರಿಮಠ, ಮಹಾದೇವ ಪವಾರ, ಬಸವನಬಾಗೇಬಾಡಿ ಮತಕ್ಷೇತ್ರ: ಸಂಯುಕ್ತಾ ಪಾಟೀಲ್
ದೇವರಹಿಪ್ಪರಗಿ ಮತಕ್ಷೇತ್ರ: ಬಾಪುಗೌಡ ಮಲ್ಲನಗೌಡ ಪಾಟೀಲ, ಮುದ್ದೇಬಿಹಾಳ ಮತಕ್ಷೇತ್ರ: ಸಿದ್ದಪ್ಪ ವಾಲೀಕಾರ್ ನಾಮಪತ್ರ ಹಿಂಪಡೆದುಕೊಂಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಚುನಾವಣೆಯಿಂದ 20 ಅಭ್ಯರ್ಥಿಗಳು Out
![ಚುನಾವಣೆಯಿಂದ 20 ಅಭ್ಯರ್ಥಿಗಳು Out ಚುನಾವಣೆಯಿಂದ 20 ಅಭ್ಯರ್ಥಿಗಳು Out](https://karnataka1news.com/wp-content/uploads/2023/04/vote-2.jpg)