ವಿಜಯಪುರ: ಇಂದು ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸುವ ಮೂಲಕ ವಿಶ್ವಕಪ್ಗೆಲ್ಲಲಿ ಎಂಬ ಹಾರೈಕೆ ದೇಶದಾದ್ಯಂತ ಮೊಳಗುತ್ತಿದೆ. ಅದರಂತೆ ಇಂದು ಗುಮ್ಮಟನಗರಿ ವಿಜಯಪುರದ ಮನಗೂಳಿ ರಸ್ತೆಯ ರಿಂಗ್ರೋಡ್ಬಳಿಯಿರುವ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕದ ಮೂಲಕ ಭಾರತ ಕ್ರಿಕೆಟ್ತಂಡಕ್ಕೆ ಶುಭ ಕೋರಲಾಯಿತು. ಕ್ರಿಕೆಟ್ಅಭಿಮಾನಿಗಳು ಭಾರತದ ಆಟಗಾರರ ಧ್ವಜವನ್ನ ಹಿಡಿದ ಭಾರತ ತಂಡದ ಪರ ಘೋಷಣೆ ಕೂಗಿದರು. ಅಲ್ಲದೇ ಭಾರತದ ಕ್ರಿಕೆಟ್ಆಟಗಾರರ ಪೋಸ್ಟರ್ಹಿಡಿದು ಆಲ್ದಿ ಬೆಸ್ಟ್ಇಂಡಿಯಾ, ಗೆಲ್ಲಲಿ ಗೆಲ್ಲಲಿ ಭಾರತ ಗೆಲ್ಲಲಿ ಎಂದು ಶುಭ ಹಾರೈಸುವ ಜೊತೆಗೆ ಆ ಆಟಗಾರರ ಪೋಸ್ಟರ್ಗಳನ್ನ ದೇವರ ಪ್ರತಿಮೆಯ ಮುಂದಿಟ್ಟು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕತೆಯ ಮೂಲಕ ದೇಶಪ್ರೇಮವನ್ನ ಮೆರೆದರು. ಇದಲ್ಲದೇ ಮಧ್ಯಾನ್ಹ ಪಂದ್ಯ ಆರಂಭವಾಗುತ್ತಿದ್ದಂತೆ ಪಂದ್ಯ ವೀಕ್ಷಣೆಗಾಗಿ ದೇವಸ್ಥಾನದ ಅಂಗಳದಲ್ಲಿ ಸಾರ್ವಜನಿಕರಿಗಾಗಿ ಮತ್ತು ಕ್ರೀಡಾ ಪ್ರೇಮಿಗಳ ವೀಕ್ಷಣೆಗಾಗಿ ಬೃಹತ್ಎಲ್ಈಡಿ ಪರದೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಮಂಡಳಿಯವರು ತಿಳಿಸಿದರು.