ವಿಜಯಪುರ: ಪ್ರತಿಷ್ಠಿತ ವಿಡಿಸಿಸಿ ಬ್ಯಾಂಕ್ನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಂತರ ರೂಪಾಯಿ ವಂಚನೆಗೈದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 2022 ಮೇ 1 ರಂದೇ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಈವರೆಗೂ ಆರೋಪಿಗಳನ್ನು ಪತ್ತೆ ಹಚ್ಚಿದ ಬಗ್ಗೆ ನಿಖರ ಮಾಹಿತಿ ಹೊರಬಿದ್ದಿಲ್ಲ. ಆದ್ರೇ ಕೇಸ್ ಮಾತ್ರ ದಾಖಲು ಮಾಡಲಾಗಿದೆ.
ಸೈಯದ್ ಮನ್ಸೂರ್ಅಹ್ಮದ ಆರೀಫ್, ಹಣಮಂತ ಮುಂಜಾನೆ, ಸೈಫುದ್ದಿನ್ ಶಿರಾಜ್ಅಹ್ಮದ್ ಶೇಖ್, ವೆಂಕಟೇಶ ಕೋಪಡರೆ, ನಜೀರ್ಅಹ್ಮದ ಶೇಖ್, ಗಜಾನಂದ ಬಿಸನಕಿ, ರಾಘವೇಂದ್ರ ಮಾಲಿಪಾಟೀಲ್, ರಾಘವೇಂದ್ರ ಚವ್ಹಾಣ, ಶಿಲ್ಪಾ ವೆಂಕಟೇಶ ಕೋಪಡರೆ, ಭಾರತಿ ಇಂಡಿ, ಶರಣಗೌಡ ಮಾಲಿಪಾಟೀಲ, ಬಿಲಾಲ್ ನತ್ಸರ್, ಬಸವರಾಜ್ ಜಮಖಂಡಿ, ದೀಪಾ ಬಸ್ಮೆ, ಗೌಸ್ ಬೇಪಾರಿ, ಲಾಡ್ಲೆಸಾಬ್ ಮುಲ್ಲಾ, ದೀಲಿಪ್ ನಾಯಕ್, ಇಮಾಮಸಾಬ್ ಜಮಾದಾರ್, ಮನೋಹರ ನಾಯಕ್, ಯಲ್ಲಗೊಂಡ ಮುಗಲಾಯಿ, ಶ್ರೀಧರ್ ಗುಡದಿನ್ನಿ, ಶಿವಾನಂದ ಚಿಕ್ಕೋಡಿ, ಶಶಿಕಾಂತ ತಾವರಗೇರೆ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ನಕಲಿ ದಾಖಲೆ ನೀಡಿ 3 ಕೋಟಿ 15 ಲಕ್ಷ ಹಣ ಪಡೆದುಕೊಂಡಿದ್ದಾರೆ. ಇನ್ನೂ ಒಟ್ಟು 8 ಜನ ಸಾಲಗಾರರು ಹಾಗೂ 11ಜನ ಜಾಮೀನುದಾರರು ಬ್ಯಾಂಕ್ನ ಸದಸ್ಯತ್ವ ಹೊಂದಿ ಖಾತೆ ಹೊಂದಿರುತ್ತಾರೆ. ಅದರಂತೆ ಇನ್ನೂ 3 ಜನರೊಂದಿಗೆ ಕೂಡಿ ಬ್ಯಾಂಕ್ನಿಂದ ಸಾಲ ಪಡೆಯಲು ಸುಳ್ಳು ಸ್ಪಷ್ಟನೆ ನೀಡಿ ಮತ್ತು ಖೊಟ್ಟಿ ದಾಖಲಾತಿಗಳನ್ನು ನೀಡಿ ಮತ್ತು ಖೊಟ್ಟಿ ಮೊಹರು, ಸಹಿ ಮಾಡಿ ದಾಖಲಾತಿಗಳನ್ನು ನೈಜವೆಂದು ನಂಬಿಸಿ ಮೋಸ ಮಾಡಿದ್ದಾರೆ. ಎಲ್ಲ ಖೊಟ್ಟಿ ದಾಖಲೆಗಳನ್ನು ವಿಡಿಸಿಸಿ ಮಹಿಳಾ ಶಾಖೆ ಹಾಗೂ ಕೇಂದ್ರ ಕಚೇರಿಗೆ ನೀಡಿ ಸಾಲ ಪಡೆದು ವಂಚನೆಗೈದಿದ್ದಾರೆ. ಈ ಕುರಿತು ಗಾಂಧಿಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಅಧ್ಯಕ್ಷರ ಮಾತು..*
ಅಲ್ಲದೇ, ಈ ಬಗ್ಗೆ ಮಾಜಿ ಸಚಿವ ಹಾಗೂ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಬ್ಯಾಂಕ್ ಇಬ್ಬರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದರು.