ವಿಜಯಪುರ: ಆ ಯುವಕರು ಒಂದೊಳ್ಳೆ ಕನಸು ಕಂಡಿದ್ರೂ.. ನಮ್ಮ ಜೀವನಕ್ಕೆ ಭದ್ರತೆ ಸಿಗುವ ಕೆಲಸ ಸಿಕ್ತು ಅನ್ನೋವಾಗ್ಲೇ.. ಆ ಯುವಕರಿಗೆ ಲಕ್ಷ ಲಕ್ಷ ಪಂಗನಾಮ ಹಾಕ್ಲಾಗಿತ್ತು..
ಹೌದು..! ದುಬೈ ಕೆಲಸದ ಹೆಸರಿನಲ್ಲಿ ಆ ಯುವಕರಿಬ್ಬರಿಗೆ ಲಕ್ಷ ಲಕ್ಷ ದುಬೈ ಮಾತ್ರ ನೋಡಿದ್ದಾರೆ… ದುಬೈನಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಯುವಕರಿಬ್ಬರಿಗೆ ಲಕ್ಷಾಂತರ ಹಣ ಪಂಗನಾಮ ಹಾಕಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಸಾರಗ ರಾಠೋಡ, ರಮೇಶ ರಾಠೋಡ ಮೋಸ ಹೋದವರು.
ಇನ್ನು ಮುಕ್ತುಂ ಮುಜಾವರ್ ಮೋಸ ಮಾಡಿದವರು. ದುಬೈನಲ್ಲಿ 40 ಸಾವಿರ ವೇತನ ನೀಡುವ ಕೆಲಸ ನೀಡುವುದಾಗಿ ಈ ಇಬ್ಬರಿಂದ ತಲಾ ಒಬ್ಬರಿಂದ 1.5 ಲಕ್ಷದಂತೆ ಇಬ್ಬರಿಂದ 3 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ ಎಂದು ಸಾಗರ ಹಾಗೂ ರಮೇಶ ರಾಠೋಡ ಆರೋಪಿಸಿದ್ದಾರೆ. ಆದ್ರೇ, ಯಾವುದೇ ಕೇಸ್ ದಾಖಲು ಆಗಿಲ್ಲ.