ವಿಜಯಪುರ: ಮೊಸರುನಾಡು ಖ್ಯಾತಿ ಯ ಕೊಲ್ಹಾರ ಪಟ್ಟಣದ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ ತಡೆದು ಹಣ ದರೋಡೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನಾವಣೆ ಹೇಳಿದರು.
ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಂತೇಶ ತಳವಾರ, ಧರೇಶ ದಳವಾಯಿ, ಶಿವಪ್ಪ ಮಾಶ್ಯಾಳ, ಸುನೀಲ ವಡ್ಡರ, ಶಿವಾನಂದ ದಳವಾಯಿ ಬಂಧಿತರು. ಚಂದ್ರಕಾಂತ ಕುಂಬಾರಗೆ ಸಂಬಂಧಿಸಿದ ಹತ್ತಿಯನ್ನು ಧಾರವಾಡ ಜಿಲ್ಲೆಯ ಅಮೀನಬಾವಿಯ ಅನೀಲಕುಮಾರ & ಕಂಪನಿಗೆ ಮಾರಾಟ ಮಾಡಿದ 32,29,364 ಹಣ ದೋಚಿಕೊಂಡು ಪರಾರಿಯಾಗಿದ್ದರು. ಕೃತ್ಯದಲ್ಲಿ ಶಾಮೀಲಿದ್ದ ಕ್ಯಾಂಟರ ಚಾಲಕ ಸೇರಿ ಐವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿತರಿಂದ ಕೃತ್ಯಕ್ಕೆ ಬಳಸಿದ ವಾಹನ, ಬಡಿಗೆ, ರಾಡ್ ಹಾಗೂ ಸುಲಿಗೆಯಾದ ಹಣದ ಪೈಕಿ 31,04,364 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದರು.
32 ಲಕ್ಷ ದರೋಡೆ ಕೇಸ್ನಲ್ಲಿ ಚಾಲಕ ಸೇರಿ ಐವರ ಬಂಧನ
![](https://karnataka1news.com/wp-content/uploads/2024/05/IMG-20240518-WA0112-860x484.jpg)