ವಿಜಯಪುರ: ವ್ಯಕ್ತಿಗೆ ಲೋನ್ ನೀಡುವ ಆಸೆ ತೋರಿಸಿ ಸಾವಿರಾರು ನಗದು ವಂಚನೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಜಂಬಗಿ ಆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗಣಪತಿ ಹೊನ್ನಳ್ಳಿ ಮೋಸ ಹೋದವರು. ಪಿಎಂಇಜಿಪಿ ಯೋಜನೆ ಅಡಿಯಲ್ಲಿ 35% ಸಬ್ಸಿಡಿ ಲೋನ್ ನೀಡುತ್ತೇವೆ ಎಂದು ಗಣಪತಿಗೆ 44,400 ನಗದು ವಂಚನೆ ಮಾಡಿದ್ದಾನೆ. ಅಲ್ಲದೇ, ಆನ್ಲೈನ್ ಮೂಲಕ ಲಿಂಕ್ ಕಳಿಸಿ ಮೊದಲು ಹಣ ನೀಡಿದ್ರೇ 1 ರಿಂದ 25 ಲಕ್ಷ ಲೋನ ನೀಡಲಾಗುತ್ತದೆ. ಅದರಲ್ಲಿ 35% ಸಬ್ಸಿಡಿ ಆಸೆ ತೋರಿಸಿ ಆನ್ಲೈನ್ ಮೂಲಕ ವಂಚನೆ ಮಾಡಿದ್ದಾನೆ. ಈ ಕುರಿತು ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.