ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ನಾಲ್ಕನೇ ದಿನವಾದ ಏಪ್ರಿಲ್ 18ರ ಮಂಗಳವಾರದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 24 ಅಭ್ಯರ್ಥಿಗಳಿಂದ ಒಟ್ಟು 25 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. 26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 02, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 02, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 02, 29-ಬಬಲೇಶ್ವರ ಮತಕ್ಷೇತ್ರದಿಂದ 04, 30-ಬಿಜಾಪುರ ನಗರ ಮತಕ್ಷೇತ್ರದಿಂದ 01, 31-ನಾಗಠಾಣ (ಎಸ್ಸಿ) ಮತಕ್ಷೇತ್ರದಿಂದ 07, 32-ಇಂಡಿ ಮತಕ್ಷೇತ್ರದಿಂದ 03 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 04 ನಾಮಪತ್ರಗಳು ಸೇರಿದಂತೆ ಒಟ್ಟು 25 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.
ಮುದ್ದೇಬಿಹಾಳ ಮತಕ್ಷೇತ್ರದಿಂದ ಕಾಶಿನಾಥ ದೊಡಮನಿ ( ಬಹುಜನ ಸಮಾಜ ಪಕ್ಷ), ಚನ್ನಬಸಪ್ಪ ಸೋಲಾಪುರ (ಜನತಾ ದಳ ಜಾತ್ಯಾತೀತ) ಅವರು ನಾಮಪತ್ರ ಸಲ್ಲಿಸಿದ್ದಾರೆ. ದೇವರಹಿಪ್ಪರಗಿ ಮತಕ್ಷೇತ್ರದಿಂದ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ (ಜನತಾ ದಳ (ಜಾತ್ಯಾತೀತ)), ದುಂಡಸಿ ಅಬ್ದುಲರಹೀಮಾನ ಮಹ್ಮದಹನೀಫ್ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ. ಬಸವನಬಾಗೇವಾಡಿ ಮತಕ್ಷೇತ್ರದಿಂದ ಸಂಯುಕ್ತಾ ಪಾಟೀಲ (ಪಕ್ಷೇತರ), ಶಿವಾನಂದ ಪಾಟೀಲ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರದಿಂದ ಸಂಗಯ್ಯ ಮರಿಮಠ (ಪಕ್ಷೇತರ), ಮಹಾದೇವ ಪವಾರ (ಪಕ್ಷೇತರ), ಸಂಗಪ್ಪ ಇಂಡಿ (ಪಕ್ಷೇತರ) ಹಾಗೂ ರವಿಚಂದ್ರ ತಮ್ಮಣ್ಣ ಡೊಂಬಾಳಿ (ರಾಷ್ಟ್ರೀಯ ಸಮಾಜ ಪಕ್ಷ) ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜಾಪುರ ನಗರ ಮತಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ (ಭಾರತೀಯ ಜನತಾ ಪಾರ್ಟಿ (ಬಿಜೆಪಿ)) ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಗಠಾಣ ಮತಕ್ಷೇತ್ರದಿಂದ ವೆಂಕಟೇಶ್ವರ ಎಂ.ಎಸ್. ಉರ್ಫ ದೀಪಕ (ಹಿಂದೂಸ್ತಾನ ಜನತಾ ಪಾರ್ಟಿ), ಕವಿತಾ ವಿ. ಕಟಕಧೋಂಡ (ರಾಣಿ ಚೆನ್ನಮ್ಮ ಪಾರ್ಟಿ), ಗಂಗಾರಾಮ ಕಟಕಧೋಂಡ (ಪಕ್ಷೇತರ), ಪ್ರೇಮಿಲಾ ಕಟಕಧೋಂಡ (ಪಕ್ಷೇತರ), ವಿಕ್ರಮ ವಾಘಮೋರೆ (ಕರ್ನಾಟಕ ರಾಷ್ಟ್ರ ಸಮಿತಿ), ಶ್ರೀಕಾಂತ ಬಂಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಹಾಗೂ ದೇವಾನಂದ ಚವ್ಹಾಣ (ಜನತಾ ದಳ ಜಾತ್ಯಾತೀತ) ಅವರು ನಾಮಪತ್ರ ಸಲ್ಲಿಸಿದ್ದಾರೆ. ಇಂಡಿ ಮತಕ್ಷೇತ್ರದಿಂದ ನಾಗೇಶ ಹುಸೇನಿ ಶಿವಶರಣ (ಬಹುಜನ ಸಮಾಜ ಪಾರ್ಟಿ), ಬಸವರಾಜ ಪಾಟೀಲ ಉರ್ಫ ಗೌಡರ (ಜನತಾ ದಳ ಜಾತ್ಯಾತೀತ) – 2 ನಾಮಪತ್ರಗಳು) ಅವರು ನಾಮಪತ್ರ ಸಲ್ಲಿಸಿದ್ದಾರೆ. ಸಿಂದಗಿ ಮತಕ್ಷೇತ್ರದಿಂದ ಪುಂಡಲೀಕ ಬಿರಾದಾರ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ದೀಪಿಕಾ ಎಸ್. (ಪಕ್ಷೇತರ), ದಸ್ತಗೀರ ಬಾಷಾ ಮಕಾನದಾರ (ಬಹುಜನ ಸಮಾಜ ಪಾರ್ಟಿ) ಹಾಗೂ ವಿಶಾಲಾಕ್ಷಿ ಪಾಟೀಲ (ಜನತಾ ದಳ (ಜಾತ್ಯಾತೀತ)) ಅವರು ನಾಮಪತ್ರ ಸಲ್ಲಿಸಿದ್ದಾರೆ.