ವಿಜಯಪುರ: ಶುಗರ್ ಫ್ಯಾಕ್ಟರಿ ಪರವಾನಿಗೆ ಕೊಡಿಸುವಾಗಿ ಹೇಳಿ 6 ಕೋಟಿ 2 ಲಕ್ಷ ರೂಪಾಯಿ ವಂಚನೆಗೈದ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರದ ಆದರ್ಶ ನಗರದ ಆಶ್ರಮ ರಸ್ತೆಯ ವ್ಯಾಪಾರಿ ಅಜೀತಕುಮಾರ ಬಾಳಾಸಾಹೇಬ ಕುಚನೂರ ಎಂಬುವರು ಮೋಸಕ್ಕೆ ಒಳಗಾಗಿದ್ದಾರೆ. ಬಳ್ಳಾರಿಯ ಬಿ.ವೀರಭದ್ರಪ್ಪ, ಈತನ ಪತ್ನಿ ಬಿ. ಕವಿತಾ ಹಾಗೂ ಇತರರು ಕೂಡಿಕೊಂಡು ಹಣ ಪಡೆಯುವ ದುರುದ್ಧೇಶದಿಂದ ಶುಗರ್ ಫ್ಯಾಕ್ಟರಿ ಪರವಾನಿಗೆ ಕೊಡಿಸುವುದಾಗಿ ಸುಳ್ಳು ಹೇಳಿ ಬೇರೆ ಬೇರೆ ಅಧಿಕಾರಿಗಳಂತೆ ನಟಿಸಿ ವಂಚನೆಗೈದಿದ್ದಾರೆ.
ಅಲ್ಲದೇ, ಹೆದರಿಸಿ, ಬೆದರಿಸಿ ಹಂತ ಹಂತವಾಗಿ 6 ಕೋಟಿ 2 ಲಕ್ಷ ರೂಪಾಯಿಯನ್ನು ಪಡೆದಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಜೀತಕುಮಾರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಶುಗರ್ ಫ್ಯಾಕ್ಟರಿ ಪರವಾನಿಗೆ ಹೆಸರಿನಲ್ಲಿ 6 ಕೋಟಿ 2 ಲಕ್ಷ ವಂಚನೆ
![](https://karnataka1news.com/wp-content/uploads/2024/06/shutterstock_526404799-1.jpg)