ವಿಜಯಪುರ: ಕಬ್ಬಿನ ರವದಿಗಾಗಿ 6 ಜನರ ಮೇಲೆ 15ಕ್ಕೂ ಹೆಚ್ಚು ಜನರು ಮಾರಣಾಂತಿಕ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ನಾಗೂರ ಗ್ರಾಮದಲ್ಲಿ ನಡೆದಿದೆ. ಜಾನಿಬಾಯಿ ರಾಠೋಡ, ಶಾರುಬಾಯಿ ಚವ್ಹಾಣ, ಬಬಲು ಚವ್ಹಾಣ, ದೇವಪ್ಪ ರಾಠೋಡ, ಮಹಾಂತೇಶ ರಾಠೋಡ, ಪೂಜಾ ಬಂಟನೂರು ಹಲ್ಲೆಗೊಳಗಾದವರು. ಇನ್ನು ಶಿವರಾಜ ಗುಂಡಕನಾಳ , ದೇವರಾಜ್ ಗುಂಡಕನಾಳ, ನಾಗರಾಜ್ ಗುಂಡಕನಾಳ, ನಿಂಗರಾಜ್ ಸೇರಿದಂತೆ 15ಕ್ಕೂ ಹೆಚ್ಚು ಜನರು ಆಯುಧದಿಂದ ಹಲ್ಲೆಗೈದಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಅಲ್ಲದೇ, ಹಲ್ಲೆಗೊಳಗಾದವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ತಾಳಿಕೋಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.