ವಿಜಯಪುರ: ಪಿಎಸ್ಐ ಪುತ್ರನ ಹತ್ಯೆಯ ಕೇಸ್ನಲ್ಲಿ ಎಂಟು ಜನರ ವಿರುದ್ಧ ವಿಜಯಪುರದ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಫ್ ಅಹ್ಮದ್ ಶೇಖ್, ಅತೀಫ್ ಅಬ್ರಾರ್ ಶೇಖ್, ಅನೀಶ್ ಶೇಖ್, ರೈಸ್ ಉಸ್ಮಾನ ಶೇಖ್, ಇಸ್ಕಾನ್ ಶೇಖ್, ಫಮೀದಾ ನಾಲಬಂದ್, ಫಕ್ರೂದೀನ್ ಯೂಸುಫ್ಸಾಬ್, ಮಕಸೂದ್ ವಿರುದ್ಧ ಕೇಸ್ ದಾಖಲಾಗಿದ್ದು, ಪಿಎಸ್ಐ ಪುತ್ರ ಮುಸ್ತಕಿನ್ ಕೂಡಗಿ ಬೈಕ್ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ವಾಹನ ಅಪಘಾತ ಪಡಿಸಿ ಬಳಿಕ ಆಯುಧದಿಂದ ಹತ್ಯೆಗೈದು ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಶೋಯೆಬ್ ಕೂಡಗಿ ದೂರು ದಾಖಲು ಮಾಡಿದ್ದಾರೆ.