ವಿಜಯಪುರ: ಪಿಎಸ್ಐ ಪುತ್ರನ ಹತ್ಯೆಯ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಮಾಜಿ ಮಹಾನಗರ ಪಾಲಿಕೆ ಸದಸ್ಯ ರೌಫ್ ಶೇಖ್, ರೌಫ್ ಪುತ್ರ ಆತಿಫ್ ಶೇಖ್, ವಿಲಾಸ್ ರಾಠೋಡ್, ಅನೀಲ್ ಚೌಹಾನ್ ಬಂಧಿತ ಆರೋಪಿಗಳು. ನಗರದ ರೇಡಿಯೋ ಕೇಂದ್ರದ ಬಳಿ ಫೆಬ್ರವರಿ 15ರಂದು ಪಿಎಸ್ಐ ಪುತ್ರ ಮುಸ್ತಕಿನ್ ಕೂಡಗಿ ಬೈಕ್ಗೆ ಅಪಘಾತ ಪಡಿಸಿ ಬಳಿಕ ಹತ್ಯೆಗೈದು ಪರಾರಿಯಾಗಿದ್ದರು. ಇದೀಗ್ ನಾಲ್ವರು ಆರೋಪಿಗಳನ್ನ ಬಂಧಿಸಿ ದರ್ಗಾ ಜೈಲ್ಗೆ ಕಳುಹಿಸಲಾಗಿದೆ. ಇನ್ನು ವಿಲಾಸ್ ರಾಠೋಡ್, ಅನೀಲ್ ಚೌಹಾನ್ ಕಾಂಟ್ರಾಕ್ಟ್ ಕಿಲ್ಲರ್ಸ್ ಗಳಾಗಿದ್ದಾರೆ ಎಂದು ಎಸ್ಪಿ ಹೇಳಿದರು.