ವಿಜಯಪುರ: ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಗೋಳಗುಮ್ಮಟ್ ಹತ್ತಿರ ನಡೆದಿದೆ.
ಸಮೀರ ಇನಾಮದಾರ, ಮಹ್ಮದ ಯೂಸುಫ್ ಕೋಟ್ಯಾಳ, ಸಾಹೀಲ್ ಬಾಂಗಿ ಬಂಧಿತರು. ಇನ್ನು ಬಂಧಿತರು ಮೂರು ಮನೆಗಳ್ಳತನ ಪ್ರಕರಣಲ್ಲಿ 15.14 ಲಕ್ಷ ಮೌಲ್ಯದ 300 ಗ್ರಾಮ ಚಿನ್ನಾಭರಣ, 520 ಬೆಳ್ಳಿಯನ್ನು ಪೊಲೀಸರು ಜಪ್ತಿಗೈದಿದ್ದಾರೆ. ಅಲ್ಲದೇ, ಆರೋಪಿಗಳ ವಿರುದ್ಧ ಮೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.