ವಿಜಯಪುರ: ಐತಿಹಾಸಿಕ ನಗರಿ ವಿಜಯಪುರ ಜಿಲ್ಲೆಗೂ ಧರ್ಮ ದಂಗಲ್ ಕಾಲಿಟ್ಟಿದೆ. ವಿಜಯಪುರದ ಸಿದ್ಧೆಶ್ವರ ಜಾತ್ರೆಗೆ ಮುಸ್ಲಿಂ ಸೇರಿದಂತೆ ಅನ್ಯ ಧರ್ಮಿಯರ ವ್ಯಾಪಾರಗಳಿಗೆ ಮಳಿಗೆ ಹಾಕಲು ನಿಷೇಧಿಸಬೇಕು ಎಂದು ವಿಜಯಪುರದ ನಗರದ ಸಿದ್ಧೆಶ್ವರ ದೇವಸ್ಥಾನದ ಬಳಿಯ ಸಭಾಂಗಣದಲ್ಲಿ ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ ಮತ್ತು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಜಾತ್ರೆಯಲ್ಲಿ ಅಂಗಡಿ, ಮುಂಗಟ್ಟು ಹಾಕಲು ಮುಸ್ಲಿಂರಿಗೆ ಅವಕಾಶ ನೀಡಬಾರದು ಎಂದು
ಶ್ರೀರಾಮ ಸೇನೆ ರಾಜ್ಯ ಪ್ರಮುಖ ನೀಲಕಂಠ ಕೆಂದಗಲ್ ನೇತೃತ್ವದಲ್ಲಿ ಮನವಿ ನೀಡಿದರು.