ಬಾಗಲಕೋಟ: ಮೂರು ಹೆಣ್ಣು ಮಕ್ಕಳಿಗೆ ವಿಷ ಉಣ್ಣಿಸಿ ತಾನು ವಿಷ ಕುಡಿದು ತಾಯಿ-ಮಕ್ಕಳು ಸಾವನಪ್ಪಿರುವ ಘಟನೆ ಬಾಗಲಕೋಟ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ರೇಖಾ ಬಗಲಿ(28), ಮಕ್ಕಳಾದ ಸನ್ನಿಧಿ(8), ಸಮೃದ್ದಿ(5), ಶ್ರೀನಿಧಿ(3) ಮೃತಪಟ್ಟಿರುವ ದುರ್ದೈವಿಗಳು. ರೇಖಾ ಇತ್ತೀಚೆಗೆ ಮಾನಸಿಕ ಮನನೊಂದಿದ್ದರು. ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ಓದು, ಬೆಳೆಸೋದು, ಮದುವೆ ಹೇಗೆ ಎಂದು ಚಿಂತಿಸಿ ಮಾನಸಿಕವಾಗಿ ಬಳಲಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಮೃತ ರೇಖಾಳನ್ನು ಬೀಳಗಿ ತಾಲ್ಲೂಕಿನ ಸುನಗ ಗ್ರಾಮಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ರೇಖಾ ಗಂಡ ಅರ್ಜುನ ಕಬ್ಬು ಕಟಾವು ಮಾಡುವ ಕೆಲಸ ಮಾಡುತಿದ್ದರು. ಬಾಗಲಕೋಟೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.