ವಿಜಯಪುರ: ಅಕ್ರಮವಾಗಿ ಮದ್ಯ ಹಾಗೂ ಕಳ್ಳಬಟ್ಟಿ ಸಾರಾಯಿ ಮಾರಾಟಕ್ಕೆ ಯತ್ನಿಸಿರುವಾಗ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬೇನಾಳ ಎನ್ ಎಚ್ ಗ್ರಾಮದಲ್ಲಿ ನಡೆದಿದೆ. ಹಣಮಂತ ಲಮಾಣಿ ಬಂಧಿತ ಆರೋಪಿ. ಅಲ್ಲದೇ, ಆರೋಪಿಯಿಂದ 10 ಸಾವಿರ ಮೌಲ್ಯದ 15.84 ಲೀಟರ್ ಮದ್ಯ ಹಾಗೂ 8 ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿಗೈದಿದ್ದಾರೆ. ಅಲ್ಲದೇ, ದಾಳಿ ವೇಳೆ ಯಲ್ಲವ್ವ ದಿಂಡವಾರ, ರೇವಣಸಿದ್ದಪ್ಪ ಹಡಪದ, ಸಾವಿತ್ರಿ ಗೆದ್ದಲಮರಿ ಪರಾರಿಯಾಗಿದ್ದಾರೆ. ವಿಜಯಪುರ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.