ವಿಜಯಪುರ: ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ತಡವಾಗಿ ಬೆಳಕಿಗೆ ಬಂದಿದೆ. ನೇಹಾಲ್ ಮೈಬೂಬಸಾಬ್ ತಾಂಬೋಲಿ, ರಿಯಾಜ್ ನಬಿರಸೂಲ್ ಕೋತವಾಲ್, ಸಿರಾಜನವಾಜ್ ಶಬ್ಬಿರ್ಅಹ್ಮದ್ ಶೇಖ್ ಬಂಧಿತರು. ಅಕ್ರಮವಾಗಿ ಒಂದು ಕಂಟ್ರಿ ಪಿಸ್ತೂಲ್, 7.65 ನಂಬರಿನ ಮೂರು ಜೀವಂತ ಗುಂಡುಗಳು, ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, 25(1)(A), 29(A), 29(B), ಆರ್ಮ್ ಆ್ಯಕ್ಟ್ 1959 ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.