ವಿಜಯಪುರ: ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರದ ತೊರವಿ ಗ್ರಾಮದಲ್ಲಿ ನಡೆದಿದೆ. ಖತಿಜಾಪುರ ನಿವಾಸಿ ರವಿ ಸಂಗಮೇಶ ಬಾಡಗಂಡಿ, ಮುಜಾವರ ಗಲ್ಲಿ ನಿವಾಸಿ ಸತೀಶ ಊರ್ಫ್ ಲಕ್ಷ್ಮಿಕಾಂತ ಚಂದ್ರಶೇಖರ ಜಾಧವ ಹಾಗೂ ಓರ್ವ ಅಪ್ರಾಪ್ತ ಬಲಕನನ್ನು ಬಂಧಿಸಲಾಗಿದೆ.
ಜೂ.5 ರಂದು ತೊರವಿ ಗ್ರಾಮದ ಹತ್ತಿರ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದಾಗ ಪೊಲೀಸರು ಬಂಧಿಸಿ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇವರಿಂದ
1.80 ಲಕ್ಷ ರೂ.ಮೌಲ್ಯದ
ಒಟ್ಟು ಆರು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆಯಲ್ಲಿ ಠಾಣಾ ಪಿಎಸ್ಐ ಜಿ.ಎಸ್. ಉಪ್ಪಾರ ಸೇರಿದಂತೆ ಸಿಬ್ಬಂದಿಗಳು ಇದ್ದರು.