ವಿಜಯಪುರ: ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳ, ಬಾಂದಾರಗಳು, ಕೆರೆ ಕಟ್ಟೆಗಳು ಹಿನ್ನೆಲೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥನ
ದೇವಸ್ಥಾನದ ಗರ್ಭಗುಡಿಗೆ ರವಿವಾರ ನೀರು ಪ್ರವೇಶಿಸಿದೆ. ಗರ್ಭಗುಡಿಯಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಪ್ರತಿವರ್ಷದಂತೆ ಈ ವರ್ಷವೂ ಶಿವರಾತ್ರಿಗೆ ಸಂಗಮನಾಥನಿಗೆ ಗ್ರಾಮಸ್ಥರು ಪೂಜೆ ಅಭಿಷೇಕ ನೆರವೇರಿಸಿದರು. ಗರ್ಭಗುಡಿಯಲ್ಲಿ ನಾಲ್ಕೈದು ಅಡಿ ನೀರು ಇದ್ದರು ಸಂಗಮನಾಥನಿಗೆ ಹಾಲು, ಮೊಸರು, ತುಪ್ಪ ಅಭಿಷೇಕ ಮಾಡಿದರು. ಈ ವೇಳೆ
ಭಜನಾ ಪದ ಹಾಡುವ ಮೂಲಕ ಭಕ್ತರು ಜಾಗರಣೆ ನಡೆಸಿದರು. ನೀರು ಆಗಮನದಿಂದ ಭಕ್ತರು ಸಂತಸಕೊಂಡಿದ್ದಾರೆ.
4 ಅಡಿ ನೀರಿನಲ್ಲಿ ಸಂಗಮನಾಥನಿಗೆ ಪೂಜೆ
![](https://karnataka1news.com/wp-content/uploads/2023/02/IMG_20230219_080646-860x478.jpg)