ವಿಜಯಪುರ: ಪ್ರಜಾಧ್ವನಿ ಬಸ್ ಯಾತ್ರೆ ಹಿನ್ನೆಲೆ ಕೈ ನಾಯಕಿಯರ ನೇತೃತ್ವದಲ್ಲಿ ಮನೆಗೊಂದು ಮೊಬೈಲ್ ಹಾಗೂ ಒಂದು ಸೀರೆ ಹಂಚಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಮಹಿಳೆಯರಿಗೆ ರಾಜಾರೋಷವಾಗಿ 1200 ರೂ.ಮೌಲ್ಯದ ಮೊಬೈಲ್ ಹಾಗೂ 300 ರೂ. ಮೌಲ್ಯದ ಸೀರೆ ಹಂಚುತ್ತಿದ್ದಾರೆ ಎಂದು ಬಬಲೇಶ್ವರ ಯುವ ಮೋರ್ಚಾ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾಹಿತಿ ನೀಡಿದ್ದಾರೆ. KA 28 Z ನಂಬರಿನ ಕಾರಿನಲ್ಲಿ ಸಾವಿರಾರು ಸೀರೆ ಹಾಗೂ ಮೊಬೈಲ್ ಹಂಚುತ್ತಿದ್ದಾರೆ. ಅಲ್ಲದೇ, ತಪ್ಪದೇ ಪ್ರಜಾಧ್ವನಿ ಬಸ್ ಯಾತ್ರೆಗೆ ಬನ್ನಿ. ಯಾತ್ರೆಯನ್ನು ಯಶಸ್ವಿಗೊಳಿಸಿ ಎಂದು ಮಹಿಳೆಯರಿಗೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿರಾದಾರ ಆಗ್ರಹಿಸಿದ್ದಾರೆ.