ವಿಜಯಪುರ: ಆಕಸ್ಮಿಕ ಬೆಂಕಿ ಅವಘಡದಿಂದ ನಿಂಬೆಹಣ್ಣಿನ ಗಿಡಗಳು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ನಡೆದಿದೆ. ರೈತ ಬುದ್ದಪ್ಪ ಐರೋಡಗಿ ಎಂಬುವರ ಗಿಡಗಳು ಭಸ್ಮವಾಗಿವೆ. ಜಮೀನಿನ 35 ಹಾಗೂ ಜಮೀನಿನ ಬದುವಿನಲ್ಲಿರುವ 15 ನಿಂಬೆಹಣ್ಣಿನ ಗಿಡಗಳು ಭಸ್ಮವಾಗಿವೆ. ಅಲ್ಲದೇ, ಸ್ಥಳಕ್ಕೆ ಜೆಡಿಎಸ್ ಮುಖಂಡ ಬಿಡಿ ಪಾಟೀಲ್ ಭೇಟಿ ನೀಡಿದರು. ಅಲ್ಲದೇ, ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.