ವಿಜಯಪುರ: ಕಾಂಗ್ರೆಸ್ ಬಿಟ್ಟವರು ವಾಪಸ್ಸು ಬಂದ್ರೆ ಬರಮಾಡಿಕೊಳ್ಳುವುದು ಹೈಕಮಾಂಡಗೆ ಬಿಟ್ಟಿರುವ ತೀರ್ಮಾನ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಅವರು ಪಕ್ಷಕ್ಕೆ ಅನಿವಾರ್ಯವಾಗಿ ಹೇಗೆ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ. ನಾವು ವೈಯಕ್ತಿಕವಾಗಿ ಬೇಕು, ಬೇಡ ಅನ್ನೋದನ್ನ ಹೇಳಬಹುದಷ್ಟೆ ಎಂದರು.
ಉಮೇಶ ಕತ್ತಿ ಕುಟುಂಬ ಕಾಂಗ್ರೆಸ್ ಬರುತ್ತೆ ಎನ್ನುವ ವದಂತಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಿದ್ಧಾಂತಗಳನ್ನ ಒಪ್ಪಿ ಪಕ್ಷಕ್ಕೆ ಬಂದ್ರೆ ಸ್ವಾಗತ ಮಾಡಲಾಗುವುದು.
ಅಲ್ಲದೇ, ಬಿಜೆಪಿಯಲ್ಲು ಕಿತ್ತಾಟ ಇದೆ. ಬಿಜೆಪಿ ಯಡಿಯೂರಪ್ಪರನ್ನು ಬಳಸಿಕೊಳ್ತಿದೆ. ಬಿಜೆಪಿಯಲ್ಲು ಸಮಸ್ಯೆ ಇದೆ. ಇದರ ಜೊತೆಗೆ
ಎಲ್ಲ ಪಕ್ಷದಲ್ಲು ಸಮಸ್ಯೆ ಇರೋದು ಸ್ವಾಭಾವಿಕ ಎಂದರು. ನಾಳೆ ಕೇಂದ್ರ ಬಜೆಟ್ ಹತ್ತರಲ್ಲಿ ಹನ್ನೊಂದು ಆಗಿದೆ. ನೀವು ಅವರನ್ನೆ ಕೇಳಿ, ಯಾರ ಕಡೆಗೆ ಸಿಡಿ ಇದೆ ಅಲ್ಲಿಯೆ ಕೇಳಿ ಎಂದರು. ಪ್ರಕರಣ ಸಿಬಿಐ ತನಿಖೆಗೆ ಕೂಡುವ ಪ್ರಶ್ನೆ ಉದ್ಭವಿಸಲ್ಲ. ಇದು ಇಬ್ಬರ ವ್ಯಕ್ತಿಗಳ ನಡುವಿನ ಯುದ್ಧ ಆಗಿದೆ. ಯಾರ ಕಡೆಗೆ ಏನಿದೆ ಎನ್ನುವುದು ನಮಗೆ ಗೊತ್ತಿಲ್ಲ. ನಾವೇನು ಹೇಳೋಕೆ ಆಗಲ್ಲ ಎಂದರು.