ಭೀಮಾತೀರದಲ್ಲಿ ಅಮಾನವೀಯ ಘಟನೆ ! ಇಬ್ಬರು ಬಂಧನ

Karnataka 1 News
ಭೀಮಾತೀರದಲ್ಲಿ ಅಮಾನವೀಯ ಘಟನೆ ! ಇಬ್ಬರು ಬಂಧನ
Oplus_0

ವಿಜಯಪುರ: 20 ಸಾವಿರ ಹಣಕ್ಕಾಗಿ ಓರ್ವನಿಗೆ ಸರಪಳಿಯಂದ ಕಟ್ಟಿ ಹಾಕಿರುವ ಅಮಾನವೀಯ ಘಟನೆ ಭೀಮಾತೀರದಲ್ಲಿ ನಡದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾಷಾಸಾಬ್ ಮುಲ್ಲಾ ಎನ್ನುವನ ಕಾಲಿಗೆ ಸರಪಳಿ ಬಿಗಿದು ಅಮಾನವೀಯ ಕೃತ್ಯ ಎಸೆಯಲಾಗಿದೆ. ಇನ್ನು ಡ್ರೈವಿಂಗ್ ಕೆಲಸಕ್ಕೆ ಬರುತ್ತೇನೆ ಎಂದು ಭಾಷಾಸಾಬ್ ಮುಲ್ಲಾ 20 ಸಾವಿರ ಸಾಲ ಪಡೆದಿದ್ದ. ಆದ್ರೇ, ಕೆಲಸಕ್ಕೆ ಬಂದಿಲ್ಲ. ಅದಕ್ಕಾಗಿ ಹಣ ವಾಪಸ್ ಕೊಡದೆ ಇರೋದಕ್ಕೆ ಸರಪಳಿಯಿಂದ ಕುಮಾರ ಬಿರಾದಾರ, ಶ್ರೀಶೈಲ ಪಿರಗೊಂಡ ಕಟ್ಟಿ ಹಾಕಿದ್ದಾರೆ‌. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿ ಚಡಚಣ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";