ವಿಜಯಪುರ: ಹಿಂದೂ ನಾಯಕಿ ಬಿಜೆಪಿ ಪಕ್ಷದಲ್ಲಿ ಮತ್ತೇ ಕಾಣಿಸಿಕೊಳ್ಳುವ ಮೂಲಕ ಕಮಲ ಮಹಿಳೆಯರಲ್ಲಿ ನಡುಕ ಹುಟ್ಟಿಸಿದ್ದಾರೆ. ಹೌದು.. ಕಳೆದ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ತಪ್ಪಿರುವ ಹಿನ್ನೆಲೆ ಪಕ್ಷದಿಂದ ದೂರು ಉಳಿದದ್ದರು. ಆದ್ರೀಗ, ಮತ್ತೇ ವಿಜಯಪುರ ನಗರದ ಸಾಯಿ ಮಂಗಳ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಹಿಂದೂ ನಾಯಕಿ ಹಾಗೂ ಬಿಜೆಪಿ ನಾಯಕಿ ಮಂಚಾಲೇಶ್ಚರಿ ತೊನಶ್ಯಾಳ ಕಾರ್ಯಕ್ರಮದಲ್ಲಿ ಆಗಮಿಸಿದ್ದಾರೆ. ಇದರಿಂದ ಪಕ್ಷದ ಮಹಿಳಾ ಮಣಿಗಳು ಸ್ವಲ್ಪ ಗರಂ ಆಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಬರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಸಲುವಾಗಿ ದುಡಿಮೆ ಮಾಡುತ್ತೇನೆ ಎಂದು ಮಂಚಾಲೇಶ್ಚರಿ ಮಾತುಗಳಾಗಿವೆ. ಇನ್ನೂ ಸಮಾವೇಶದಲ್ಲಿ ಭಾಗವಹಿಸಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರಿಗೆ ಖಡ್ಗ ನೀಡುವ ಮೂಲಕ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದರು.