ಬೆಳಗಾವಿ: ಖಾನಾಪುರ ತಾಲೂಕಿನ ಜಾಂಬೋಟಿ ವ್ಯಾಪ್ತಿಯ ಹಬ್ಬನಹಟ್ಟಿ ಗ್ರಾಮದ ರೈತ ಮಹಿಳೆಯೊಬ್ಬರ ಮೇಲೆ ಕರಡಿ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಬ್ಬನಹಟ್ಟಿಯ ರೇಣುಕಾ ಈರಪ್ಪ ನಾಯ್ಕ್ (ವಯಸ್ಸು 60 ವರ್ಷ) ದನಗಳೊಂದಿಗೆ ಜಮೀನಿಗೆ ಹೋಗಿದ್ದರು. ಚರಂಡಿಗೆ ಹೋಗಿದ್ದ ಪ್ರಾಣಿಗಳನ್ನು ವಾಪಸ್ ಕರೆತರಲು ಹೋದಾಗ ಅಲ್ಲಿಯೇ ಕುಳಿತಿದ್ದ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿವೆ. ಆಕೆಯ ಹಣೆ ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮಹಿಳೆ ಕಿರುಚಿಕೊಂಡ ತಕ್ಷಣ ಆಕೆಯ ಪತಿ ಮತ್ತು ಇತರ ರೈತರು ಸಹಾಯಕ್ಕೆ ಬಂದಿದ್ದಾರೆ. ಆದ್ರೆ, ಕರಡಿಗಳನ್ನು ಕೋಲು ಮತ್ತು ಕಲ್ಲುಗಳಿಂದ ಹೊಡೆದು, ಮಹಿಳೆಯನ್ನು ಅವರ ಹಿಡಿತದಿಂದ ತೆಗೆದುಹಾಕಲಾಯಿತು. ಬಳಿಕ ರಕ್ತಸ್ರಾವದಿಂದ ಬಳಲುತ್ತಿದ್ದ ರೇಣುಕಾ ಅವರನ್ನು ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.