ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದ ಚಪ್ಪಲಿ ಅಂಗಡಿ ಭಸ್ಮವಾಗಿರುವ ಘಟನೆ ವಿಜಯಪುರ ನಗರದ ಸರಾಫ್ ಬಜಾರ್ ಬಳಿ ಮಂಗಳವಾರ ನಡೆದಿದೆ. ಕರ್ನಾಟಕ ಫುಟ್ ವೇರ್ ಅಂಗಡಿಗೆ ಬೆಂಕಿ ತಗುಲಿದೆ. ಬೆಳಗಿನ ಜಾವ ೪ ಗಂಟೆ ವೇಳೆಗೆ ಅಂಗಡಿಗೆ ಬೆಂಕಿ ತಗುಲಿದ್ದು,
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸಿದರು. ಅಲ್ಲದೇ, ಅಪಾರ ಪ್ರಮಾಣದ ವಸ್ತುಗಳು ಭಸ್ಮವಾಗಿವೆ. ಗಾಂಧಿಚೌಕ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಆಕಸ್ಮಿಕ ಬೆಂಕಿಗೆ ಚಪ್ಪಲಿ ಅಂಗಡಿ ಭಸ್ಮ
![](https://karnataka1news.com/wp-content/uploads/2023/06/IMG_20230613_083124-860x492.jpg)