ವಿಜಯಪುರ: ಲಂಚ ಸ್ವೀಕರಿಸುವ ವೇಳೆ
ಲೋಕಾಯುಕ್ತ ಬಲೆಗೆ ಪ್ರಥಮ ದರ್ಜೆ ಸಹಾಯಕ ಹಾಗೂ ಜವಾನ್ ಬಲೆ ಬಿದ್ದಿರುವ ಘಟನೆ ವಿಜಯಪುರ ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದಿದೆ. ಎಫ್ಡಿಎ ರಮೇಶ್ ಹೊನ್ನಹಳ್ಳಿ ಮತ್ತು ಜವಾನ್ ಪ್ರಮೋದ್ ಕನಸಿನ ಬಲೆಗೆ ಬಿದ್ದವರು. ಎನ್ಎ ಲ್ಯಾಂಡ್ಗೆ ಎನ್ಓಸಿ ನೀಡುವ ಸಂಬಂಧ 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇನ್ನೂ ದೂರಿನ ಮೇರೆಗೆ ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣವರ ನೇತೃತ್ವದಲ್ಲಿ ದಾಳಿಗೈದು ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.