ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಅರಳು ಮೆರಳು ಆಗಿದೆ ಎಂದು ಸಚಿವ ಎಂಬಿ ಪಾಟೀಲ್ ಕಿಡಿಕಾರಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಕಮೀಷನರ್ ಲೋವರ್ ಕೆಡರ್ ಎಂದು ಹೇಳಿದ್ದಾರೆ. ಇದೇ ಶಾಸಕ ಯತ್ನಾಳ ಹಿಂದಿನ ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ಅವರನ್ನು ಮುಂದುವರಿಸಬೇಕೆಂದು ಲೆಟರ್ ಕೊಟ್ಟಿದ್ದರು. ಅವರಿಗೆ ಅರಳು ಮರಳು ಇರಬೇಕು. ಅಲ್ಲದೇ, ರಾಜ್ಯದ ಜನ ಸ್ಪಷ್ಟವಾಗಿ136 ಸ್ಥಾನ ನೀಡಿದ್ದಾರೆ. ಯಾರೋ ಹೇಳಿಕೆ ನೀಡಿದ್ರೇ ಸರ್ಕಾರಕ್ಕೆ ಏನೂ ಆಗಲ್ಲ. ಬಾಲಿಷ ಹೇಳಿಕೆ ಅವರದ್ದು ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಗ 10 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಈ ಹಿಂದೆಯೇ ಮಾತನಾಡಿದ್ದರು. ಅವರದ್ದೇ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ನನ್ನ ಬಳಿ ವಿಡಿಯೋ ಇದೆ. ಇದೆಲ್ಲ ಬಹಿರಂಗ ವಿಚಾರ. ಹೀಗಾಗಿ ಕಾಂಗ್ರೆಸ್ ಮೇಲಿನ ಅವರ ಆರೋಪದಲ್ಲಿ ಹುರಳಿಲ್ಲ ಎಂದರು.