ವಿಜಯಪುರ: ವಿಜಯಪುರ ತಾಲ್ಲೂಕಿನ ಅರಕೇರಿ ಎಲ್ಟಿ ನಂಬರ 2 ಆಪ್ಟೆ ಫೌಂಡೇಶನ್ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ” ನಿಸರ್ಗದ ಜೊತೆ ಒಂದು ದಿನ” ಎಂಬ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ತುಳಸಿಗಿರೀಶ ಫೌಂಡೇಶನ್ ವತಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಧುಮೇಹ ತಜ್ಞರು ಮತ್ತು ಸಮಾಜಸೇವಕರಾದ ಬಾಬುರಾಜೇಂದ್ರ ನಾಯಿಕ ಅವರು ಮಾತನಾಡಿ ಇಳಿ ವಯಸ್ಸಿನಲ್ಲಿ ಕ್ರಮಬದ್ಧವಾದ ಆರೋಗ್ಯದ ಕಾಳಜಿ ವಹಿಸುವುದು ಅನಿವಾರ್ಯ ವಾದದ್ದು. ನಮ್ಮ ದೇಹ ಮತ್ತು ಪ್ರಕೃತಿಯ ನಡುವೆ ಇದ್ದ ಸಂಬಂಧಗಳು ಚೆನ್ನಾಗಿ ಇಟ್ಟುಕೊಂಡರೆ ನಾವೆಲ್ಲರೂ ಆರೋಗ್ಯವಂತರಾಗಿ ಇರಲು ಸಾಧ್ಯ. ಆಪ್ಟೆ ಫೌಂಡೇಶನ್ ವತಿಯಿಂದ ವಿನೂತನವಾಗಿ ಮಾಡಿರುವ ” ಒಂದು ದಿನಪ್ರಕೃತಿ ಮಡಿಲಲ್ಲಿ” ಕಾರ್ಯಕ್ರಮ ಮಾಡಿದ್ದು ನಿಜಕ್ಕೂ ಸುಖಕರ ಸಂಗತಿ ಮಧುಮೇಹ ದ ಬಗ್ಗೆ ಜಾಗೃತರಾಗಿ ಎಂಬ ಮಾತಿನಿಂದ ಎಲ್ಲರ ಗಮನ ಸಿಳಿದ ಡಾ. ಬಾಬುರಾಜೇಂದ್ರ ನಾಯಿಕ. ಈ ಸಂದರ್ಭದಲ್ಲಿ ಆಪ್ಟೆ ಫೌಂಡೇಶನ್ ಮುಖ್ಯಸ್ಥರು ಪತ್ರಕರ್ತರು ವಿನಯ ಆಪ್ಟೆ, ರಾಮಸಿಂಗ ರಜಾಪುತ , ರಾಹುಲ್ ಆಪ್ಟೆ , ರೋಹಿತ ಆಪ್ಟೆ ದೇಶ ರಕ್ಷಕ ಪಡೆಯ ಸಂಸ್ಥಾಪಕ ರೋಹನ ಆಪ್ಟೆ , ಈಶ್ವರ ತೋಷ್ನಿವಾಲ, ಅನಿಲ ಚವಾಣ, ನಂದಾ ಛತ್ರೆ ಉಪಸ್ಥಿತರಿದ್ದರು.