ವಿಜಯಪುರ: ಅಪರಿಚಿತ ಯುವಕನೋರ್ವ ಬಟ್ಟೆ ತೆಗೆದು ಬಡಿಬಾವಡಿಯಲ್ಲಿ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಗಗನ ಮಹಲ್ ಬಳಿಯ ಬಡಿ ಬಾವಡಿಯಲ್ಲಿ ನಡೆದಿದೆ. ಇನ್ನು ಮೃತಪಟ್ಟಿರುವ ಅಪರಿಚಿತ ಯುವಕನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಬಡಿ ಬಾವಡಿ ಬಳಿ ಬಟ್ಟೆ ತೆಗೆದು ಬಾವಡಿಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಗ್ನಿ ಶಾಮಕ ದಳದವರು ಮೃತಪಟ್ಟಿರುವ ದೇಹವನ್ನು ಹೊರಗಡೆಗೆ ತೆಗೆದಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.