ವಿಜಯಪುರ: ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ಎಪಿಎಂಸಿ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣಾ ಗದ್ಯಾಳ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿ ಕೃಷ್ಣಾನಿಂದ ಮೂರು ಬೈಕ್, ಒಂದು ಟ್ರ್ಯಾಕ್ಟರ್ ಟ್ರ್ಯಾಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಎಪಿಎಂಸಿ ಪಿಎಸ್ಐ ಜ್ಯೋತಿ ಕೋಟ್, ಕ್ರೈಂ ಪಿಎಸ್ಐ ಪ್ರೇಮಾ ಕೂಚಬಾಳ್ ನೇತೃತ್ವದಲ್ಲಿ ಆರೋಪಿಯ ಬಂಧನ ಮಾಡಲಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/09/IMG-20230904-WA0051.jpg)