ವಿಜಯಪುರ: ಬಸ್ ಏರುವಾಗ ಬ್ಯಾಗ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನವನ್ನು(gold) ಕಳ್ಳರು ಕಳ್ಳತನಗೈದಿರುವ ಘಟನೆ ವಿಜಯಪುರ ನಗರದ ಸೇಟ್ಲೈಟ್ ಬಸ್(bus) ನಿಲ್ದಾಣದಲ್ಲಿ ನಡೆದಿದೆ. ಸರಸ್ವತಿ ಪೂಜಾರಿ ಎಂಬುವರ 1 ಲಕ್ಷ 30 ಸಾವಿರ ಮೌಲ್ಯದ 48 ಗ್ರಾಂದ ತಾಳಿ ಚೈನ್, ಗುಂಡಿನ ಸರ್, ಕಿವಿಯೋಲೆಯನ್ನು ಕಳ್ಳತನ ಮಾಡಿದ್ದಾರೆ. ಇನ್ನು ಬಸ್ನಲ್ಲಿ ಬ್ಯಾಗ್ ಚೆಕ್ ಮಾಡಿದಾಗ ಚಿನ್ನ ಇರಲಿಲ್ಲ. ಅದಕ್ಕಾಗಿ ಕಳ್ಳರನ್ನು ಪತ್ತೆ ಮಾಡುವಂತೆ ದೂರು ನೀಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ(police)/ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.