ವಿಜಯಪುರ: ಚಲಿಸುತ್ತಿದ್ದ ಬಸ್ನಿಂದ ವೃದ್ಧೆ ಇಳಿಯುವಾಗ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ನಗರದ ಕೊಲ್ಹಾರ ರಸ್ತೆಯಲ್ಲಿ ನಡೆದಿದೆ. ತೊನಶ್ಯಾಳ ಗ್ರಾಮದ ಶಂಕ್ರಮ್ಮ ಬಿರಾದಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಚಲಿಸುತ್ತಿದ್ದ ಬಸ್ನಿಂದ ಶಂಕ್ರಮ್ಮ ಇಳಿಯುವಾಗ ಈ ಅವಘಡ ಸಂಭವಿಸಿದೆ. ಅಪಘಾತ ಪಕ್ಕದಲ್ಲಿದ್ದ ಜಲನಗರ ಪೊಲೀಸ ಠಾಣಾ ಪಿಎಸ್ಐ ದೀಪಾ ವೃದ್ಧೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/09/IMG_20230913_140212-1024x461.jpg)