ವಿಜಯಪುರ: ಕೋಪದಲ್ಲಿ ಹೆಂಡತಿ ಹಾಗೂ ಹೆಂಡತಿಯ ತಾಯಿಯನ್ನು ಗಂಡ ಹತ್ಯೆಗೈದಿದ್ದಾನೆ ಎಂದು ಎಸ್ಪಿ ಸೋನಿವಾನೆ ಭಗವಾನ್ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ರೂಪಾ ಮೈತ್ರಿ, ಕಲ್ಲವ್ವ ಮೈತ್ರಿ ಹತ್ಯೆಯಾದವರು. ಇನ್ನು ಆರೋಪಿ ಮಲ್ಲಿಕಾರ್ಜುನ ಕೋಪದಲ್ಲಿ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಅದಕ್ಕಾಗಿ ಆರೋಪಿ ಮಲ್ಲಿಕಾರ್ಜುನ ಹಾಗೂ ಕೃತ್ಯಕ್ಕೆ ಬಳಸಿದ ಕಟ್ಟಿಗೆ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು.