ವಿಜಯಪುರ: ಭೀಮಾತೀರದ ಹತ್ಯಾಕಾಂಡದಿಂದ ಜಿಲ್ಲೆಯ ಹೆಸರು ಹಾಳಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಕಿಡಿಕಾರಿದರು.
ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ ರೌಡಿಶೀಟರ್ ಪರೇಡ್ನಲ್ಲಿ ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ್ಗೆ ಖಡಕ್ ಎಚ್ಚರಿಕೆ ನೀಡಿದರು. ಚಡಚಣ, ಬೈರಗೊಂಡು ದ್ವೇಷದಿಂದ ಜಿಲ್ಲೆಯ ಹೆಸರು ಹಾಳಾಗಿದೆ. ಮನೆಯಲ್ಲಿ ಅಕ್ರಮ ಗನ್ ಇಟ್ಟಿದ್ರೇ ಗ್ರಹಚಾರ ಬಿಡಸ್ತೇನಿ ಎಂದು ಸಾಹುಕಾರ್ಗೆ ಎಸ್ಪಿ ಖಡಕ್ ವಾರ್ನಿಂಗ್ ನೀಡಿದರು. ಇನ್ಮೇಲೆ ಹತ್ಯೆ ಮಾಡುವ ಪ್ಲ್ಯಾನಿಂಗ್ ಮಾಡಿದ್ರೇ ನಿಮ್ಗೆ ಬ್ಯಾರೇನೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದರು.