ವಿಜಯಪುರ: ಗಣೇಶ ಹಬ್ಬದ ಪ್ರಯುಕ್ತ ವಿಜಯಪುರ ನಗರದ ಶಿವಾಜಿ ಸರ್ಕಲ್ನಲ್ಲಿ ಅಳವಡಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬ್ಯಾನರ್ನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ. ಶಾಸಕ ಯತ್ನಾಳರ ಬೃಹತ್ ಬ್ಯಾನರ್ನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಅದಕ್ಕಾಗಿ ಪೊಲೀಸ ನೇತೃತ್ವದಲ್ಲಿ ಯತ್ನಾಳ ಬ್ಯಾನರ್ ತೆರವು ಮಾಡಿದರು. ಸ್ಥಳದಲ್ಲಿ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.