ವಿಜಯಪುರ: ಎಸ್ಬಿಐ ((SBI) ಎಟಿಎಂನಲ್ಲಿದ್ದ 12 ಲಕ್ಷ ನಗದು(Money) ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಎಪಿಎಂಸಿ ಗೇಟ್ ಬಳಿ ನಡೆದಿದೆ. ಕಳೆದ ತಡರಾತ್ರಿ ಎಟಿಎಂಗೆ ಭದ್ರತಾ ಸಿಬ್ಬಂದಿಯಿಲ್ಲದ್ದನ್ನು ಗಮನಿಸಿದ ಕಳ್ಳರು ಎಟಿಎಂಗೆ ನುಗ್ಗಿ ಗ್ಯಾಸ್ ಕಟರ್ನಿಂದ ಎಟಿಎಂ ಒಡೆದು 12 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಅಲ್ಲದೇ, ಎಟಿಎಂನಲ್ಲಿದ್ದ ಸಿಸಿಟಿವಿಗೆ ಖದೀಮರು ಸ್ಪ್ರೇ ಮಾಡಿ ಕಳ್ಳತನ ಮಾಡಿದ್ದಾರೆ. ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/10/IMG_20231011_125945-1024x542.jpg)