ವಿಜಯಪುರ: ವಿಶ್ವ ಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಮೂವರು ಕ್ರಿಕೆಟ್ ಬುಕಿಗಳನ್ನು ಬಂಧಿಸಿರುವ ಘಟನೆ ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿ ನಡೆದಿದೆ. ಕಿರಣ ನಾಯಕ್, ಗೌಸಪಾಕ್ ಹಾವೇರಿ, ದಾವಲ್ ಪಟೇಲ್ ಬಂಧಿತರು. ಇನ್ನು ಇಂಡಿಯಾ ಹಾಗೂ ಅಫ್ಘಾನಿಸ್ತಾನ ವಿಶ್ವ ಕಪ್ ಪಂದ್ಯದಲ್ಲಿ ಇಂಡಿಯಾ ಗೆದ್ದರೆ ಒಂದು ಸಾವಿರಕ್ಕೆ ಮೂರು ಸಾವಿರ ಹಾಗೂ ಅಫ್ಘಾನಿಸ್ತಾನ ಗೆದ್ದರೆ ಒಂದು ಸಾವಿರಕ್ಕೆ ಎರಡು ಸಾವಿರ ಅಂತೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುವಾಗ ಪೊಲೀಸರು ದಾಳಿಗೈದು 3170, ಬೆಟ್ಟಿಂಗ್ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/10/Cricket-1024x559.jpg)