ವಿಜಯಪುರ: ಹಳೆ ವೈಷಮ್ಯ ಹಿನ್ನೆಲೆ ವಿಜಯಪುರ ನಗರದ ಒಡ್ಡರ ಓಣಿಯಲ್ಲಿ ಓರ್ವನ ಮೇಲೆ ಫೈರಿಂಗ್ ಹಿನ್ನೆಲೆ 9 ಜನರ ವಿರುದ್ಧ ಕೇಸ್ ದಾಖಲಾಗಿದೆ. ಮಹಮ್ಮದ್ ನದಾಫ್, ಜಮೀರ್ ಊರ್ಪ್ ಜಮ್ಯಾ, ಖಾದರ ನದಾಫ್, ಮಲೀಕ್ ರೀಹಾನ್ ಊರ್ಫ್ ಫೀರಾ, ನಬೀರಸೂಲ್ ಊರ್ಫ್ ಗುಂಡ್ಯಾ, ಸಮೀರ್ ಯರಗಲ ಊರ್ಫ್ ಚಾರ್ಲಿ ಸಮ್ಯಾ, ತೋಹಿದ್ ಅಥನೂರ್, ಅಬ್ದುಲ್ ಖಾದೀರ ಖದಿಮ್, ಮುಜ್ಮಿನ್ ಊರ್ಫ್ ಮುಜ್ಜು ವಿರುದ್ಧ ಕೇಸ್ ದಾಖಲಾಗಿದೆ. ನಿನ್ನೆ ಸಂಜೆ ಶೋಯೆಲ್ ಕಕ್ಕಳಮೇಲಿ ಹೋಗಿದ್ದ ಬೈಕ್ಗೆ 9 ಜನರು ಫೈರಿಂಗ್ ನಡೆಸಿ, ಮಚ್ಚಿನಿಂದ ಹಲ್ಲೆಗೈದಿದ್ದಾರೆ. ಗಾಯಾಳು ಸೋಯೆಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/11/IMG-20231110-WA0116-1024x768.jpg)