ವಿಜಯಪುರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 30 ಟನ್ ಪಡಿತರ ಅಕ್ಕಿ(Rice) ವಶಪಡಿಸಿಕೊಂಡ ಘಟನೆ ಸಿಂದಗಿ ಪಟ್ಟಣದ ತೋಟದ ಜಮೀನಿನಲ್ಲಿ ನಡೆದಿದೆ. ಪಟ್ಟಣದ ಕಾಂತಪ್ಪ ಭೂಸನೂರ ಅವರ ತೋಟದಲ್ಲಿ ಅಕ್ರಮವಾಗಿ 30 ಟನ್ ಪಡಿತರ ಅಕ್ಕಿ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ, 30 ಟನ್ ಅಕ್ಕಿ ಹಾಗೂ 2 (Two) ಲೋಡ್ ಅಕ್ಕಿ ಹೊಂದಿದ್ದ ವಾಹನಗಳನ್ನು ಇಂಡಿ ಉಪವಿಭಾಗಾಧಿಕಾರಿ ಆಬೀದ್ ಗದ್ಯಾಳ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ದಾಳಿಯಲ್ಲಿ ತಹಸೀಲ್ದಾರ್ ಸುರೇಶ, ಆಲಮೇಲ ಪಿಎಸ್ಐ ಮತ್ತಿತರರು ಪಾಲ್ಗೊಂಡಿದ್ದರು.
![](https://karnataka1news.com/wp-content/uploads/2023/12/IMG-20231209-WA0199-1024x768.jpg)