ಹುಬ್ಬಳ್ಳಿ: ಒಡಹುಟ್ಟಿದ ತಮ್ಮನ್ನನ್ನೇ ಅಣ್ಣ(Brother) ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ(Hubli) ವಿಜಯ ನಗರದಲ್ಲಿ ನಡೆದಿದೆ. ಚಾಕುವಿನಿಂದ ಇರಿದು ತಮ್ಮ ಪವನ ಕಾಟ್ವಾಟೆ (30) ಕೊಲೆ ಮಾಡಲಾಗಿದೆ. ಚಾಕುವಿನಿಂದ ಹೊಟ್ಟೆ, ಕುತ್ತಿಗೆಗೆ ಇರಿದಿರುವ ಅಣ್ಣ ರಾಜುನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಿನನಿತ್ಯ ಕುಡಿದು ಕಿರಿಕಿರಿ ಮಾಡುತ್ತಿದ್ದ ಪವನನ್ನು ಕುಟುಂಬಸ್ಥರು ಮನೆಯಿಂದ ಹೊರ ಹಾಕಿದರು. ಅದಕ್ಕಾಗಿ ಹೋಟೇಲ್ ಒಂದರಲ್ಲಿ ರೂಮ ಮಾಡಿಕೊಂಡು ಪವನ ವಾಸವಿದ್ದನು. ಮನೆಯಿಂದ ಆಚ್ಚಿಗೆ ಇಟ್ಟಿದ್ದರು, ಆಗಾಗ್ಗೆ ಮನೆಗೆ ಬಂದು ಪವನ ಗಾಲಾಟೆ ಮಾಡುತ್ತಿದ್ದನಂತೆ. ಇದರಿಂದ ರೋಷಿಹೋಗಿದ್ದು, ಪವನ ವಾಸವಿದ್ದ ಹೋಟೇಲ್ ರೂಮಗೆ ತೆರಳಿ ರಾಜು ಕೊಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಅದಕ್ಕಾಗಿ ಅಣ್ಣ ರಾಜುನನ್ನ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG-20231220-WA0057.jpg)