ವಿಜಯಪುರ: ಬ್ಯಾಂಕ್ ಹಾಗೂ ಫೈನಾನ್ಸ್ನಲ್ಲಿ ಕಳ್ಳತನ ಮಾಡಿದ ಮೂವರು ಕಳ್ಳರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಹೇಳಿದರು. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಪ್ರಭು ಹಲಗಿ, ಅನಿಲ ನಾಯ್ಕೋಡಿ, ಬಸವರಾಜ ಮಾದರ ಬಂಧಿತ ಆರೋಪಿಗಳು. ಇನ್ನು ಆರೋಪಿಗಳು ಸಿಂದಗಿ ಪಟ್ಟಣದ ಪಿಕೆಪಿಎಸ್ ಬ್ಯಾಂಕ್ ಹಾಗೂ ಎಲ್ಟಿ ಫೈನಾನ್ಸ್ ಕಳ್ಳತನಕ್ಕೆ ಯತ್ನ ಸೇರಿದಂತೆ ಮೂರು ಕೇಸ್ನಲ್ಲಿ 2.20 ಲಕ್ಷ ಹಾಗೂ ಒಂದು ಕಾರು ಜಪ್ತಿಗೈದಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)