ವಿಜಯಪುರ: ಆಕಸ್ಮಿಕವಾಗಿ ಕಬ್ಬಿನ ಗದ್ದೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಕಬ್ಬು ಹಾನಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಬಸಾವಳಗಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮೂವರು ರೈತರಾದ ಅರಳಪ್ಪ ಮುಳ್ಳೊಳ್ಳಿ, ಪ್ರಭುಗೌಡ ಬಿರಾದಾರ, ಶೇಖುಗೌಡ ಬಿರಾದಾರ ಕಬ್ಬು ಹಾನಿ ಆಗಿದೆ. 14 ಎಕರೆಯಲ್ಲಿ ಬೆಳೆದಿದ್ದ ಕಬ್ಬಿನಲ್ಲಿ ಸುಮಾರು 4 ಲಕ್ಷದಷ್ಟು ಕಬ್ಬು ಹಾನಿ ಆಗಿದೆ.
ಸಿಂದಗಿ ಅಗ್ನಿ ಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಿದರು. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)