ವಿಜಯಪುರ: ಸಿಡಿಲು ಬಡಿದು ಎರಡು ಕುರಿಗಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹಾಲಿಹಾಳ ಗ್ರಾಮದಲ್ಲಿ ರವಿವಾರ ಬೆಳಗ್ಗೆ 7 ಗಂಟೆಗೆ ನಡೆದಿದೆ. ಸಾಬಣ್ಣ ಬಸನಗೌಡ ಬಿರಾದಾರ ಎಂಬುವರ ಕುರಿಗಳು ಸಾವನ್ನಪ್ಪಿವೆ. ಸಿಡಿಲು ಬಡಿದು ಮೃತ ಪಟ್ಟಿದ್ದು ಹಾಗೂ ಶಿವಸಂಗಪ್ಪ ರಾಯಪ್ಪ ಬೇವಿನಮಟ್ಟಿ ಇವರಿಗೆ ಸಿಡಿಲಿನಿಂದ ಸಣ್ಣ ಪುಟ್ಟ ಗಾಯಗಳು ಆಗಿದ್ದಾವೆ. ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲೆಯ ಬಳಬಟ್ಟಿ ಗ್ರಾಮದ ಮಲಪ್ಪ ಬಸಪ್ಪ ಕೊಪ್ಪ ಸರ್ವೇ no 84/1 ರಲ್ಲಿ ಗಾಳಿ ಮಳೆಗೆ ಕೋಳಿ ಸಾಗಾಣಿಕೆ ಶೇಡ್ ಹಾರಿ ಹೋಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ತಾಲ್ಲೂಕಿನ ಕವಲಗಿ ಗ್ರಾಮದ ಕ.ಸ. ನoಬರ್ 101 ರಲ್ಲಿ ಹಣಮಂತ ಶಿದ್ದಪ್ಪ ಛಲವಾದಿ ಇವರ ಜಮೀನದಲ್ಲಿದ ಆಕಳಿಗೆ ಸಿಡಿಲು ಬಡಿದ ಪರಿಣಾಮ ಅಸುನೀಗಿದೆ ಎಂದು ಜಿಲ್ಲಾಡಳಿತದಿಂದ ಮಾಹಿತಿ ನೀಡಿದ್ದಾರೆ.