ತುಮಕೂರು: ಸಿಲಿಂಡರ್ ಸೋರಿಕೆಯಿಂದ ಆರು ಮಂದಿ ಗಾಯಗೊಂಡಿರುವ ಘಟನೆ ತುಮಕೂರುದ ಕುಣಿಗಲ್ ಪಟ್ಟಣದ ಸಿದ್ಧಾರ್ಥ ಪ್ರೌಢಶಾಲೆ ಪಕ್ಕದ ರಸ್ತೆಯಲ್ಲಿ ನಡೆದಿದೆ. ರವಿಕುಮಾರ್ ಎಂಬುವರ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿದೆ. ಅಡುಗೆ ಅನಿಲದ ಸಿಲಿಂಡರ್ ಸೋರಿಕೆಗೊಂಡು ಆರು ಮಂದಿ ಗಾಯಗೊಂಡಿದ್ದಾರೆ. ಸೋರಿಕೆಯ ತೀವ್ರತೆಗೆ ಮನೆಯ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿವೆ. ಸಮೀನ(46), ಕುಶಾಲ್ (11) ಗಂಭೀರ ಗಾಯಗಳಾಗಿವೆ. ಅಲ್ಲದೇ,
ಮಂಜಮ್ಮ (42), ಶಿವಣ್ಣ(45), ಶ್ರುತಿ (45), ಹೇಮಲತಾ (16) ಸಣ್ಣಪುಟ್ಟ ಗಾಯಗಳು ಆಗಿದ್ದಾವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು.
ಸಿಲಿಂಡರ್ ಸೋರಿಕೆ | ಆರು ಜನರಿಗೆ ಗಾಯ
![](https://karnataka1news.com/wp-content/uploads/2024/05/ಸಿಲಿಂಡರ್-860x668.jpg)